Monday, October 30, 2017

ಶ್ರೀ ಶ್ರೀಪಾದರಾಜರಿಗೆ ಹಾಗೆ ಕರೆದವರು ಯಾರು?

























ಶ್ರೀರಘುನಾಥ ತೀರ್ಥರು ಹಾಗೂ ಶ್ರೀಶ್ರೀಪಾದರಾಜರ ಅನ್ಯೋನ್ಯ ಸಂಬಂಧ (2009) ) ಪುಸ್ತಕವನ್ನೋದಿ ನಮ್ಮ ಮಾಧ್ವ ವಿದ್ವಾಂಸರಲ್ಲಿ ಸಂಶೋಧನೆಯ ಬಗ್ಗೆ ಅತಿಕಡಿಮೆ ಗಮನವಿರುವುದು ತೀರಾ ಸ್ಪಷ್ಟವಾಗುತ್ತದೆ. ನಮಗೆ ಇಬ್ಬರೂ ಪೂಜ್ಯರೇ ಹೌದು. ನಾನೂ ಮುಳಬಾಗಿಲಿನಲ್ಲಿ ಹುಟ್ಟಿ ಈ ಕತೆಯನ್ನು ಹಲವಾರು ಬಾರಿ ಕೇಳಿ ಐತಿಹಾಸಿಕತೆ ಬಗ್ಗೆ ತಲೆಕೆಡಿಸಿಕೊಂಡು " ಅವರೇನೋ ಬರಕೋತಾರೆ, ಅದು ಮಠದ ಋಣ, ಅದಕ್ಕೆ ನೀನು ಯಾಕೆ ಒದ್ಯಾಡುತ್ತಿ? ಎಂದು ತಂದೆಯಿಂದ ಹಗುರವಾಗಿ ಬೈಸಿಕೊಂಡೂ ಇದ್ದೇನೆ. 
 ಈ ಮೊದಲು ಪ| ಚಿಕ್ಕೆರೂರು ಗೋವಿಂದಾಚಾರ್ಯ, ಚೀ. ರಘುನಾಥಾಚಾರ್ಯ, ಈಗ ಮುಕ್ಕುಂದಿ ಶ್ರೀಕಾಂತಾಚಾರ್ಯರು ಈ ವಿಷಯದ ಬಗ್ಗೆ ಬರೆದಿದ್ದಾರೆ. 

. ಈ ಪುಸ್ತಕದ ೬೭ ಪುಟಗಳಲ್ಲಿ ವಿಷಯದ ಬಗ್ಗೆ ಇರುವುದುು. ೨೯-೬೭ರವರೆಗೆ ಮಾತ್ರ! ಉಳಿದಂತೆ ಶ್ರೀಪಾದರಾಜ ಮಠದ ಶ್ರೀಗಳ ಆಶೀರ್ವಚನದ ಹೊರತಾಗಿ ಹಲವು ವಿದ್ವಾಂಸರ, ಕುಂ ವ್ಯಾಸರಾಜ ಮಠದ, ಡಾ| ಶ್ರೀನಿವಾಸ ಹವನೂರ, ಪ್ರೊ| ಕೆಟಿ ಪಾಂಡುರಂಗಿಯವರ ಅನಿಸಿಕೆ, ಆಶೀರ್ವಾದ ವಚನಗಳಿವೆ! ಎಂದರೆ ಅದು ಆಗಿನ ಪೀಠಾಧಿಪತಿ ಶ್ರೀ ವಿಜ್ಞಾನನಿಧಿ ತೀರ್ಥರಿಗೂ ಸಮ್ಮತವಿರಲಿಲ್ಲ ಎಂದಾಯಿತು.  
 ಇಬ್ಬರು ಯತಿಗಳೂ ಸಮಕಾಲೀನರು ಎನ್ನುವ ಸಂದರ್ಭದ ಈ ಕತೆಗೆ ಪೂರಕವಾಗಿ ಶ್ರೀವ್ಯಾಸರಾಯರ ಪದದ ತುಣುಕೊಂದನ್ನೂ ಸೇರಿಸಲಾಗಿದೆ.
ಇದು ಹೀಗಿದೆ:
ಪರಮತಘನವನ ಪಾವಕನೆ 
ಶರಣು ಭೂಸುರನುತ ಸಿರಿ ನಾರಾಯಣ ಯೋಗಿ|
---------------------------------
ಸುರನಾಥಪುರಕಂದು ವರ ಪುಷ್ಪವಿಮಾನದಿ
ಸರಿಯುತಲಿರೆ ರಘುನಾಥೇನ್ದ್ರರ ವರ
ವೃಂದಾವನ ಪ್ರದಕ್ಷಿಣೆಯ್ಲೀಕ್ಷಿಸಿ ಕರೆದು ಭಾಷಿಸಿ
ಕಳುಹಿದಾಶ್ಚರ್ಯಚರಿತಾ|| 
ಈ ಕೃತಿ ಕೇವಲ ಎರಡು ಹಸ್ತಪ್ರತಿಗಳಲ್ಲಿ ಮಾತ್ರ ಲಭ್ಯ!!
ನನಗೆ ತಿಳಿದಂತೆ ಶ್ರೀಪಾದರಾಜರ ಲಾಲಿ ಹಾಡುಗಳು ಸುಪ್ರಸಿದ್ಧವಾಗಿ ಮನೆ ಮಾತಾಗಿದೆ. 

ಜೋ ಜೋ ಶ್ರೀರಂಗಧಾಮಾ .... ಮತ್ತು ಲಾಲಿ ಗೋವಿಂದ ಲಾಲಿ.. ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಇದುವರೆಗೂ ಗುಪ್ತವಾಗಿದ್ದ
" ತೂಗಿರೆ ರಾಮನ| ತೂಗಿರೆ ವ್ಯಾಸನ|

 ತೂಗಿರೊ ವಿಠಲನ್ನ| " ಈಗ ಪ್ರತ್ಯಕ್ಷವಾಗಿದೆ.
 ಡಾ | ಶ್ರೀನಿವಾಸ ಹಾವನೂರರು ನಾನು ಉದಯವಾಣಿಯಲ್ಲಿದ್ದಾಗ,  ( 1979) " ತೂಗಿರೆ ರಾಯರ| ತೂಗಿರೆ ಗುರುಗಳ"  ಎಂಬ  ಕೃತಿಯನ್ನ್ನುಕಟುವಾಗಿ ಟೀಕಿಸಿದ್ದ್ದದರು

. ಈ ಒಂದು , ಉಲ್ಲೇಖ ಬಿಟ್ಟರೆ, ಶ್ರೀರಘುನಾಥ ತೀರ್ಥರ ಕೃತಿಗಳು, ಬದುಕು ಈ ಬಗ್ಗೆ ನನಗೆ ಯಾವ  ಮಾಹಿತಿಯೂ ಸಿಗಲಿಲ್ಲ. ಈ ಅನಾಮಿಕ ಸ್ವಾಮಿಗಳು ಶ್ರೀ ಶ್ರೀಪಾದರಾಜರಿಗೆ ಪ್ರೇರಕ ಶಕ್ತಿಯಾದರು ಎನ್ನುವುದೇ ಆಶ್ಚರ್ಯಕರವಾದ ಮಾಹಿತಿ. ಇತಿಹಾಸದಲ್ಲಿ ಆಸಕ್ತರು ಓದಿ ಈ ಪುಸ್ತಕವನ್ನು ಪಕ್ಕಕಿಡಬಹುದು.  ಭಾವುಕರು, ಮಠದ ಕಟ್ಟಾ ಅನುಯಾಯಿಗಳು ಭಲೇ ಎನ್ನಬಹುದು. ಎರಡೂ ಅಲ್ಲದ ನಾನು ಈ ಪುಸ್ತಕದ ಅಗತ್ಯವಾದರೂ ಹೊಸದಾಗಿ ಏನಿತ್ತು? ಎಂದು ಅಚ್ಚರಿಯಿಂದ ಕೇಳಲೂಬಹುದು. 

Intellectual debates between rival schools

There are few instances in the history of Indian schools of thought, particularly Vedanta where there were debates and dialectical argumen...