Monday, October 30, 2017

ಶ್ರೀ ಶ್ರೀಪಾದರಾಜರಿಗೆ ಹಾಗೆ ಕರೆದವರು ಯಾರು?



ಶ್ರೀರಘುನಾಥ ತೀರ್ಥರು ಹಾಗೂ ಶ್ರೀಶ್ರೀಪಾದರಾಜರ ಅನ್ಯೋನ್ಯ ಸಂಬಂಧ (2009) ) ಪುಸ್ತಕವನ್ನೋದಿ ನಮ್ಮ ಮಾಧ್ವ ವಿದ್ವಾಂಸರಲ್ಲಿ ಸಂಶೋಧನೆಯ ಬಗ್ಗೆ ಅತಿಕಡಿಮೆ ಗಮನವಿರುವುದು ತೀರಾ ಸ್ಪಷ್ಟವಾಗುತ್ತದೆ. ನಮಗೆ ಇಬ್ಬರೂ ಪೂಜ್ಯರೇ ಹೌದು. ನಾನೂ ಮುಳಬಾಗಿಲಿನಲ್ಲಿ ಹುಟ್ಟಿ ಈ ಕತೆಯನ್ನು ಹಲವಾರು ಬಾರಿ ಕೇಳಿ ಐತಿಹಾಸಿಕತೆ ಬಗ್ಗೆ ತಲೆಕೆಡಿಸಿಕೊಂಡು " ಅವರೇನೋ ಬರಕೋತಾರೆ, ಅದು ಮಠದ ಋಣ, ಅದಕ್ಕೆ ನೀನು ಯಾಕೆ ಒದ್ಯಾಡುತ್ತಿ? ಎಂದು ತಂದೆಯಿಂದ ಹಗುರವಾಗಿ ಬೈಸಿಕೊಂಡೂ ಇದ್ದೇನೆ. 
 ಈ ಮೊದಲು ಪ| ಚಿಕ್ಕೆರೂರು ಗೋವಿಂದಾಚಾರ್ಯ, ಚೀ. ರಘುನಾಥಾಚಾರ್ಯ, ಈಗ ಮುಕ್ಕುಂದಿ ಶ್ರೀಕಾಂತಾಚಾರ್ಯರು ಈ ವಿಷಯದ ಬಗ್ಗೆ ಬರೆದಿದ್ದಾರೆ. 

. ಈ ಪುಸ್ತಕದ ೬೭ ಪುಟಗಳಲ್ಲಿ ವಿಷಯದ ಬಗ್ಗೆ ಇರುವುದುು. ೨೯-೬೭ರವರೆಗೆ ಮಾತ್ರ! ಉಳಿದಂತೆ ಶ್ರೀಪಾದರಾಜ ಮಠದ ಶ್ರೀಗಳ ಆಶೀರ್ವಚನದ ಹೊರತಾಗಿ ಹಲವು ವಿದ್ವಾಂಸರ, ಕುಂ ವ್ಯಾಸರಾಜ ಮಠದ, ಡಾ| ಶ್ರೀನಿವಾಸ ಹವನೂರ, ಪ್ರೊ| ಕೆಟಿ ಪಾಂಡುರಂಗಿಯವರ ಅನಿಸಿಕೆ, ಆಶೀರ್ವಾದ ವಚನಗಳಿವೆ! ಎಂದರೆ ಅದು ಆಗಿನ ಪೀಠಾಧಿಪತಿ ಶ್ರೀ ವಿಜ್ಞಾನನಿಧಿ ತೀರ್ಥರಿಗೂ ಸಮ್ಮತವಿರಲಿಲ್ಲ ಎಂದಾಯಿತು.  
 ಇಬ್ಬರು ಯತಿಗಳೂ ಸಮಕಾಲೀನರು ಎನ್ನುವ ಸಂದರ್ಭದ ಈ ಕತೆಗೆ ಪೂರಕವಾಗಿ ಶ್ರೀವ್ಯಾಸರಾಯರ ಪದದ ತುಣುಕೊಂದನ್ನೂ ಸೇರಿಸಲಾಗಿದೆ.
ಇದು ಹೀಗಿದೆ:
ಪರಮತಘನವನ ಪಾವಕನೆ 
ಶರಣು ಭೂಸುರನುತ ಸಿರಿ ನಾರಾಯಣ ಯೋಗಿ|
---------------------------------
ಸುರನಾಥಪುರಕಂದು ವರ ಪುಷ್ಪವಿಮಾನದಿ
ಸರಿಯುತಲಿರೆ ರಘುನಾಥೇನ್ದ್ರರ ವರ
ವೃಂದಾವನ ಪ್ರದಕ್ಷಿಣೆಯ್ಲೀಕ್ಷಿಸಿ ಕರೆದು ಭಾಷಿಸಿ
ಕಳುಹಿದಾಶ್ಚರ್ಯಚರಿತಾ|| 
ಈ ಕೃತಿ ಕೇವಲ ಎರಡು ಹಸ್ತಪ್ರತಿಗಳಲ್ಲಿ ಮಾತ್ರ ಲಭ್ಯ!!
ನನಗೆ ತಿಳಿದಂತೆ ಶ್ರೀಪಾದರಾಜರ ಲಾಲಿ ಹಾಡುಗಳು ಸುಪ್ರಸಿದ್ಧವಾಗಿ ಮನೆ ಮಾತಾಗಿದೆ. 

ಜೋ ಜೋ ಶ್ರೀರಂಗಧಾಮಾ .... ಮತ್ತು ಲಾಲಿ ಗೋವಿಂದ ಲಾಲಿ.. ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಇದುವರೆಗೂ ಗುಪ್ತವಾಗಿದ್ದ
" ತೂಗಿರೆ ರಾಮನ| ತೂಗಿರೆ ವ್ಯಾಸನ|

 ತೂಗಿರೊ ವಿಠಲನ್ನ| " ಈಗ ಪ್ರತ್ಯಕ್ಷವಾಗಿದೆ.
 ಡಾ | ಶ್ರೀನಿವಾಸ ಹಾವನೂರರು ನಾನು ಉದಯವಾಣಿಯಲ್ಲಿದ್ದಾಗ,  ( 1979) " ತೂಗಿರೆ ರಾಯರ| ತೂಗಿರೆ ಗುರುಗಳ"  ಎಂಬ  ಕೃತಿಯನ್ನ್ನುಕಟುವಾಗಿ ಟೀಕಿಸಿದ್ದ್ದದರು

. ಈ ಒಂದು , ಉಲ್ಲೇಖ ಬಿಟ್ಟರೆ, ಶ್ರೀರಘುನಾಥ ತೀರ್ಥರ ಕೃತಿಗಳು, ಬದುಕು ಈ ಬಗ್ಗೆ ನನಗೆ ಯಾವ  ಮಾಹಿತಿಯೂ ಸಿಗಲಿಲ್ಲ. ಈ ಅನಾಮಿಕ ಸ್ವಾಮಿಗಳು ಶ್ರೀ ಶ್ರೀಪಾದರಾಜರಿಗೆ ಪ್ರೇರಕ ಶಕ್ತಿಯಾದರು ಎನ್ನುವುದೇ ಆಶ್ಚರ್ಯಕರವಾದ ಮಾಹಿತಿ. ಇತಿಹಾಸದಲ್ಲಿ ಆಸಕ್ತರು ಓದಿ ಈ ಪುಸ್ತಕವನ್ನು ಪಕ್ಕಕಿಡಬಹುದು.  ಭಾವುಕರು, ಮಠದ ಕಟ್ಟಾ ಅನುಯಾಯಿಗಳು ಭಲೇ ಎನ್ನಬಹುದು. ಎರಡೂ ಅಲ್ಲದ ನಾನು ಈ ಪುಸ್ತಕದ ಅಗತ್ಯವಾದರೂ ಹೊಸದಾಗಿ ಏನಿತ್ತು? ಎಂದು ಅಚ್ಚರಿಯಿಂದ ಕೇಳಲೂಬಹುದು.